ಡ್ರೈವರ್ ಮೇಲೆ ಹಲ್ಲೆ ನಡೆದ ಬಳಿಕ ಮಹಾರಾಷ್ಟ್ರ ಕರ್ನಾಟಕಕ್ಕೆ ಬಸ್ ಸೇವೆಗಳನ್ನು ಸ್ಥಗಿತಗೊಳಿಸಿದೆ
ಶ್ರೀ ಸರ್ಣಾಯಕ್ ಅವರ ಹೇಳಿಕೆಯಂತೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮ (MSRTC) ಬಸ್, ಬೆಂಗಳೂರು-ಮುಂಭೈ ಮಾರ್ಗದಲ್ಲಿ ಸಂಚರಿಸುತ್ತಿತ್ತು, ಶುಕ್ರವಾರ ರಾತ್ರಿ 9.10ಕ್ಕೆ ಚಿತ್ರದುರ್ಗದಲ್ಲಿ ಕನ್ನಡ ಕಾರ್ಯಕರ್ತರಿಂದ ಹಾನಿಗೊಳಗಾಯಿತು.
ಮುಂಬೈ: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮ (MSRTC) ಬಸ್ ಮೇಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ಣಾಯಕ್ ಶನಿವಾರ ಕರ್ನಾಟಕಕ್ಕೆ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶಿಸಿದ್ದಾರೆ.
ಸರಣಾಯಕ್ ಅವರ ಪ್ರಕಾರ, ಶುಕ್ರವಾರ ರಾತ್ರಿ 9.10ರ ಸುಮಾರಿಗೆ, ಬೆಂಗಳೂರು-ಮುಂಭೈ ಮಾರ್ಗದಲ್ಲಿದ್ದ MSRTC ಬಸ್ ಚಿತ್ರದುರ್ಗದಲ್ಲಿ ಪ್ರೋ-ಕನ್ನಡ ಕಾರ್ಯಕರ್ತರಿಂದ ಹಲ್ಲೆಗೆ ಗುರಿಯಾಗಿದೆ.
ಹಲ್ಲೆಗಾರರು ಬಸ್ ಡ್ರೈವರ್ ಭಾಸ್ಕರ್ ಜಾಧವ ಅವರ ಮುಖಕ್ಕೆ ಕಪ್ಪು ಬಣ್ಣ ಬಳಿಯುವುದರೊಂದಿಗೆ ಶಾರೀರಿಕ ಹಲ್ಲೆ ನಡೆಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಈ ಘಟನೆಯ ಬಗ್ಗೆ ಕರ್ನಾಟಕದಲ್ಲಿ ಪೊಲೀಸ್ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
"ಕರ್ನಾಟಕ ಸರ್ಕಾರ ಈ ವಿಚಾರದಲ್ಲಿ ತನ್ನ ನಿಲುವು ಸ್ಪಷ್ಟಪಡಿಸುವವರೆಗೆ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಸ್ ಸೇವೆಯನ್ನು ಪುನರಾರಂಭಿಸುವ ಪ್ರಶ್ನೆಯೇ ಇಲ್ಲ," ಎಂದು ಸರಣಾಯಕ್ ತಿಳಿಸಿದ್ದಾರೆ.
ಆದೇ ದಿನ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಬಸ್ ಕಂಡಕ್ಟರ್ ವಿರುದ್ಧ ಬೆಳಗಾವಿಯ ಹೊರವಲಯದಲ್ಲಿ ಹಲ್ಲೆ ನಡೆದಿದ್ದು, ಮರಾಠಿಯಲ್ಲಿ ಮಾತನಾಡಲು ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ದಾಳಿ ನಡೆಸಲಾಗಿದೆ ಎಂಬ ಆರೋಪವಿದೆ.
ಚಿತ್ರದುರ್ಗದಲ್ಲಿ MSRTC ಬಸ್ ಮೇಲೆ ನಡೆದ ಹಲ್ಲೆ ಬೆಳಗಾವಿಯ ಘಟನೆಯ ಪ್ರತೀಕಾರವೋ ಎಂಬುದು ಇನ್ನೂ ದೃಢಪಡಿಸಬೇಕಾಗಿದೆ.
MSRTC ಬಸ್ ಮೇಲೆ ದಾಳಿ – ಬೆಳಗಾವಿಯಲ್ಲಿ ಕಂಡಕ್ಟರ್ ವಿರುದ್ಧ ಪ್ರಕರಣ:
ಬೆಳಗಾವಿ/ಚಿತ್ರದುರ್ಗ: ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ಣಾಯಕ್ ಅವರ ಪ್ರಕಾರ, MSRTC ಬಸ್ (MH-14 KQ 7714) ಚಿತ್ರದುರ್ಗವನ್ನು ದಾಟುತ್ತಿದ್ದಂತೆಯೇ ಕನ್ನಡ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಹಲ್ಲೆಗೆ ಸಂಬಂಧಿಸಿದಂತೆ ನಾಲ್ವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ನಡುವೆ, 14 ವರ್ಷದ ಬಾಲಕಿಯ ದೂರು ಆಧಾರದ ಮೇಲೆ ಕಂಡಕ್ಟರ್ ವಿರುದ್ಧ POCSO ಕಾಯ್ದೆಯಡಿ ಪ್ರಕರಣವೂ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಂಡಕ್ಟರ್ ಹುಕ್ಕೇರಿಯ ಭಾವನಾತ್ಮಕ ಪ್ರತಿಕ್ರಿಯೆ
51 ವರ್ಷದ ಕಂಡಕ್ಟರ್ ಮಹಾದೇವಪ್ಪ ಮಲ್ಲಪ್ಪ ಹುಕ್ಕೇರಿ ಮಾಧ್ಯಮ ಪ್ರತಿನಿಧಿಗಳಿಗೆ ಮಾತನಾಡುತ್ತ, "ಸುಳೇಭಾವಿಯಲ್ಲಿ ಒಬ್ಬ ಯುವತಿ ತನ್ನ ಸ್ನೇಹಿತನೊಂದಿಗೆ ಬಸ್ಗೆ ಹತ್ತಿ ಮರಾಠಿಯಲ್ಲಿ ಮಾತನಾಡಿದರು. ನಾನು ಅವರಿಗೆ ಕನ್ನಡದಲ್ಲಿ ಮಾತನಾಡುವಂತೆ ವಿನಂತಿಸಿದೆ" ಎಂದು ವಿವರಿಸಿದರು.
"ನಾನು ಮರಾಠಿ ಬರುವುದಿಲ್ಲ" ಎಂದು ಹೇಳಿದಾಗ ಆ ಯುವತಿ "ನೀನು ಮರಾಠಿ ಕಲಿಯಲೇಬೇಕು" ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಏಕಾಏಕಿ ದೊಡ್ಡ ಗುಂಪೊಂದು ಸೇರಿ ನನ್ನ ತಲೆಯ ಮೇಲೆ ಹಾಗೂ ದೇಹದ ಬೇರೆಡೆ ಹಲ್ಲೆ ನಡೆಸಿದ್ದಾರೆ" ಎಂದು ಅವರು ಭಾಹುಕರಾದರು .
POCSO ಪ್ರಕರಣ ಮತ್ತು ಪೊಲೀಸರ ತನಿಖೆ; ಹಲ್ಲೆಗೆ ಗುರಿಯಾದ ಹುಕ್ಕೇರಿಯನ್ನು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ದೂರು ದಾಖಲಾಗಿದ್ದು, ನಾಲ್ವರನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ, 14 ವರ್ಷದ ಬಾಲಕಿಯ ದೂರಿನ ಆಧಾರದಲ್ಲಿ ಕಂಡಕ್ಟರ್ ವಿರುದ್ಧ POCSO ಕಾಯ್ದೆಯಡಿಯಲ್ಲಿ ಪ್ರಕರಣವೂ ದಾಖಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
"POCSO ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಯಾವುದೇ ಬಂಧನವಾಗಿಲ್ಲ. ನಾವು ಸಂಪೂರ್ಣ ತನಿಖೆ ನಡೆಸಿದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ವಿವರಿಸಿದರು.
"ಇಲ್ಲಿಯವರೆಗೆ ನಾಲ್ವರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಪತ್ತೆ ಮಾಡಲು ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ" ಎಂದು ಬೆಳಗಾವಿ ಪೊಲೀಸ್ ಆಯುಕ್ತ ಐಡಾ ಮಾರ್ಟಿನ್ ಮಾರ್ಬನಿಯಾಂಗ್ ತಿಳಿಸಿದ್ದಾರೆ.
ಪ್ರತೀಕಾರದ ದಾಳಿ? "ಈ ಪ್ರದೇಶವು ಸುದೀರ್ಘ ಕಾಲದಿಂದ ಭಾಷಾ ವಿವಾದ ಮತ್ತು ಗಡಿಭಾಗದ ಸಮಸ್ಯೆಗಳಿಂದ ಉದ್ವಿಗ್ನತೆಯನ್ನು ಅನುಭವಿಸುತ್ತಿದೆ. ಇಂತಹ ಘಟನೆಗಳು ಇನ್ನಷ್ಟು ಸಮಸ್ಯೆ ಉಂಟುಮಾಡಬಹುದು" ಎಂದು ಪೊಲೀಸ್ ಆಯುಕ್ತರು ಎಚ್ಚರಿಸಿದ್ದಾರೆ.
"ನಾವು ಪೂರ್ಣ ನಿಷ್ಠೆಯಿಂದ ತನಿಖೆ ನಡೆಸುತ್ತೇವೆ. ಬಸ್ನಲ್ಲಿ ಇದ್ದ ಇತರ ಪ್ರಯಾಣಿಕರಿಂದ ಹೇಳಿಕೆಗಳನ್ನು ಪಡೆಯಲಾಗುತ್ತದೆ. ಯಾವುದೇ ಒತ್ತಡವಿಲ್ಲದೆ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ಭರವಸೆ ನೀಡಿದ್ದಾರೆ.
ಪ್ರತಿಭಟನೆ ಮತ್ತು ಬಿಕ್ಕಟ್ಟಿನ ವಾತಾವರಣ
ಈ ಘಟನೆಯ ನಂತರ 2ಕನ್ನಡ ಕಾರ್ಯಕರ್ತರು ಶನಿವಾರ ಬೆಳಗಾವಿ-ಬಾಗಲಕೋಟೆ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಮರಿಹಾಳ ಪೊಲೀಸ್ ಠಾಣೆ ಮುಂದೆ ಕೂಡ ಪ್ರತಿಭಟನೆ ನಡೆಯಿತು.
ಬೆಳಗಾವಿಯಲ್ಲಿ ಗಣನೀಯ ಸಂಖ್ಯೆಯಲ್ಲಿ ಮರಾಠಿ ಭಾಷಿಕರು ವಾಸಿಸುತ್ತಿದ್ದಾರೆ. ಅವರಲ್ಲಿ ಕೆಲವರು ಈ ಜಿಲ್ಲೆಯನ್ನು ಮಹಾರಾಷ್ಟ್ರಕ್ಕೆ ವಿಲೀನಗೊಳಿಸಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ, ಆದರೆ ಕರ್ನಾಟಕ ಸರ್ಕಾರ ಮತ್ತು ಕನ್ನಡಿಗರು ಇದನ್ನು ತೀವ್ರ ವಿರೋಧಿಸುತ್ತಿದ್ದಾರೆ.
0 Comments