Ticker

6/recent/ticker-posts

Ad Code

Responsive Advertisement

ಮೈಸೂರಿನಲ್ಲಿ ಹೊಸದಾಗಿ ಆರಂಭವಾಗುತ್ತಿರುವ Peripheral Cancer Centre of Kidwai ಆಸ್ಪತ್ರೆ ನಿದಾನವಾಗಿ ರೂಪುಗೊಳ್ಳುತ್ತಿದೆ.

ಮೈಸೂರಿನಲ್ಲಿ ಹೊಸದಾಗಿ ಆರಂಭವಾಗುತ್ತಿರುವ Peripheral Cancer Centre of Kidwai ಆಸ್ಪತ್ರೆ ನಿದಾನವಾಗಿ ರೂಪುಗೊಳ್ಳುತ್ತಿದೆ.

ಡಾ. ನವೀನ್ ಅವರ ಮಾಹಿತಿ ಪ್ರಕಾರ, 2024ರಲ್ಲಿ ಬೆಂಗಳೂರು ಕಿಡ್ವಾಯಿ ಆಸ್ಪತ್ರೆಯಲ್ಲಿ 21,051 ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗಿದ್ದು, 3.89 ಲಕ್ಷಕ್ಕೂ ಹೆಚ್ಚು ರೋಗಿಗಳು ಪುನರ್ ಪರಿಶೀಲನೆಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.


ಫೆಬ್ರವರಿ 4ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸುತ್ತಿರುವ ಈ ಸಮಯದಲ್ಲಿ, ಮೈಸೂರು ಭಾಗದ ಕ್ಯಾನ್ಸರ್ ರೋಗಿಗಳಿಗೆ ಸ್ವಲ್ಪ ಶಾಂತಿಯಾಸೆಯಾಗಿದೆ. ಮೈಸೂರು ಜಿಲ್ಲೆಯಿಂದ 11,398ಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳು ಚಿಕಿತ್ಸೆಗಾಗಿ ಬೆಂಗಳೂರಿನ ಕಿಡ್ವಾಯಿ ಮೆಮೊರಿಯಲ್ ಇನ್ಸ್‌ಟಿಟ್ಯೂಟ್ ಆಫ್ ಆಂಕೋಲಜಿ‌ಗೆ ತೆರಳುತ್ತಿದ್ದರೆ, ಬೇಗನೇ ಮೈಸೂರಿನಲ್ಲಿಯೇ ಹೊಸದಾಗಿ ಸ್ಥಾಪಿಸಲಾಗುತ್ತಿರುವ Peripheral Cancer Centre of Kidwai ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಸಿಗಲಿದೆ .

ಜುಲೈ 2023ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೇಂದ್ರಕ್ಕಾಗಿ ರೂ. 40 ಕೋಟಿ ಅನುದಾನ ಘೋಷಿಸಿದ್ದರು, ಡಿಸೆಂಬರ್ 22, 2023 ರಂದು ಇದರ ಭೂಮಿ ಪೂಜೆಯನ್ನು  ನೆರವೇರಿಸಿದರು.

ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರ (MMCRI)ನ ಡೀನ್ ಮತ್ತು ನಿರ್ದೇಶಕಿ ಡಾ. ಕೆ.ಆರ್. ದಕ್ಷಾಯಣಿ ಅವರ ಪ್ರಕಾರ, ಮೈಸೂರಿನ ಕೆಆರ್‌ಎಸ್ ರಸ್ತೆಯಲ್ಲಿರುವ ಪ್ರಿನ್ಸೆಸ್ ಕೃಷ್ಣರಾಜಾಮಣಿ ಕ್ಷಯರೋಗ (PKTB) ಆಸ್ಪತ್ರೆಯ  ಆವರಣದಲ್ಲಿ ಈ ಕೇಂದ್ರಕ್ಕಾಗಿ MMCRI 5 ಎಕರೆ ಭೂಮಿಯನ್ನು ನೀಡಿದ್ದಾರೆ.

ಕಿಡ್ವಾಯಿ ಮೆಮೊರಿಯಲ್ ಇನ್ಸ್‌ಟಿಟ್ಯೂಟ್ ಆಫ್ ಆಂಕೋಲಜಿ, ಬೆಂಗಳೂರಿನ ನಿರ್ದೇಶಕರಾದ ಡಾ. ಟಿ. ನವೀನ್ ಅವರ ಪ್ರಕಾರ, ಮೈಸೂರಿನ ಈ ಕೇಂದ್ರದ ಕಟ್ಟಡ ನಿರ್ಮಾಣವು ಜೂನ್ ವೇಳೆಗೆ ಮುಗಿಯುವ ನಿರೀಕ್ಷೆಯಿದೆ. ಇದರ ಜೊತೆಗೆ, ಸಿಬ್ಬಂದಿ ನೇಮಕಾತಿ ಮತ್ತು ಉಪಕರಣಗಳ ಖರೀದಿಗಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
  

ಬೆಂಗಳೂರಿನ ಕಿಡ್ವಾಯಿಆಸ್ಪತ್ರೆಯ ಮೇಲೆ ಇರುವ ಒತ್ತಡವನ್ನು ಕಡಿಮೆ ಮಾಡಲಾಯಿತು .

   ಡಾ. ನವೀನ್ ಅವರ ಮಾಹಿತಿಯ ಪ್ರಕಾರ, 2024ರಲ್ಲಿ ಬೆಂಗಳೂರು ಕಿಡ್ವಾಯಿ ಆಸ್ಪತ್ರೆಯಲ್ಲಿ 21,051 ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗಿದ್ದು, 3.89 ಲಕ್ಷಕ್ಕೂ ಹೆಚ್ಚು ರೋಗಿಗಳು ಪುನರ್ ತಪಾಸಣೆಗೆ ಆಸ್ಪತ್ರೆಗೆ ಆಗಮಿಸಿದ್ದಾರೆ.

ಒಟ್ಟು 11,398 ರೋಗಿಗಳಲ್ಲಿ, 4,997 ಪುರುಷರು ಮತ್ತು 6,401 ಮಹಿಳೆಯರು ಮೈಸೂರು ಜಿಲ್ಲೆಯಿಂದ ಬಂದಿದ್ದಾರೆ. ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವವರಲ್ಲಿ  ಆರ್ಥಿಕವಾಗಿ ದುರ್ಬಲವಾಗಿರುವಂತಹ ವರ್ಗದವರು,ಮತ್ತು ವಿಶೇಷವಾಗಿ ಅದರಲ್ಲಿ ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವಂತ ನಿವಾಸಿಗಳಾಗಿದ್ದಾರೆ .

 ಬೆಂಗಳೂರಿನ ಕಿಡ್ವಾಯಿ ಆಸ್ಪತ್ರೆಯ ಮೇಲಿನ ಒತ್ತಡವನ್ನು ತಗ್ಗಿಸಲು ಮತ್ತು ಮೈಸೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ರೋಗಿಗಳಿಗೆ ಮೈಸೂರಿನಲ್ಲಿಯೇ ಕ್ಯಾನ್ಸರ್     ಚಿಕಿತ್ಸಾ ಸೌಲಭ್ಯ ಒದಗಿಸಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಹಾಗೂ ಕಿಡ್ವಾಯಿ ಆಡಳಿತಾಧಿಕಾರಿ ಡಾ. ವೈ.   ನವೀನ್ ಭಟ್ ಅವರ ಮಾರ್ಗದರ್ಶನದಲ್ಲಿ ಮೈಸೂರಿನಲ್ಲಿ ಈ ಪರಿಧಿ ಕ್ಯಾನ್ಸರ್ ಕೇಂದ್ರವನ್ನು ಸ್ಥಾಪಿಸಲಾಗಿದೆ .

ಹೆಚ್ಚಾಗುತ್ತಿರುವ ಕ್ಯಾನ್ಸರ್ ರೋಗಿಗಳ ಸಂಖ್ಯೆ .

 "ಕರ್ನಾಟಕದಲ್ಲಿ ಪ್ರತಿವರ್ಷ ಸರಾಸರಿ 87,850 ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತವೆ. ರಾಜ್ಯದಲ್ಲಿ ಯಾವಾಗಲೂ ಸರಿಸುಮಾರು 2.37 ಲಕ್ಷಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಶೇಷವಾಗಿ ಬೆಂಗಳೂರು ಮತ್ತು ಇತರ ಮಹಾನಗರಗಳಲ್ಲಿ ಈ ರೋಗದ ಪ್ರಮಾಣ ವರ್ಷಕ್ಕೆ ಶೇಕಡಾ 1 ರಷ್ಟು  ಹೆಚ್ಚಾಗುತ್ತಿದೆ ಎಂದು ಡಾ. ನವೀನ್ ಅವರು  ಹೇಳಿದ್ದಾರೆ ."

ಪುರುಷರಲ್ಲಿ ಅತಿಹೆಚ್ಚಾಗಿ ಕಂಡುಬರುವ  ಕ್ಯಾನ್ಸರ್‌ಗಳಲ್ಲಿ   ಬಾಯಿಯ ಕ್ಯಾನ್ಸರ್ (9.6%), ಶ್ವಾಸಕೋಶ (9.1%), ನಾಲಿಗೆ (7.3%) ಮತ್ತು ಅನ್ನ ನಾಳದ  ಕ್ಯಾನ್ಸರ್ (5.9%) ಪ್ರತ್ಯೆಕವಾಗಿ ಕಂಡು ಬರುತ್ತಿದೆ. ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್ (21.7%), ಗರ್ಭದ್ವಾರದ ಕ್ಯಾನ್ಸರ್ (cervical cancer) ಕ್ಯಾನ್ಸರ್ (16.1%), ಬಾಯಿಯ ಕ್ಯಾನ್ಸರ್ (8.7%) ಮತ್ತು ಅಂಡಾಶಯ ಕ್ಯಾನ್ಸರ್ (5.2%) ಸಾಮಾನ್ಯವಾಗಿ ಹೆಚ್ಚಾಗಿ ಕಂಡುಬರುತ್ತವೆ.

 ಮೊದಲ ಹಂತದಲ್ಲೇ  ರೋಗವನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ, ಆಧುನಿಕ ವೈದ್ಯಕೀಯ ತಂತ್ರಜ್ಞಾನದಿಂದ 60-70% ಕ್ಯಾನ್ಸರ್ ಗುಣಮುಖವಾಗುವ ಸಾಧ್ಯತೆಯಿದೆ. ಆದರೆ , 50% ಕ್ಕೂ ಹೆಚ್ಚು ರೋಗಿಗಳು ದೀರ್ಘಗತಿಯ ಹಂತಗಳಲ್ಲಿ ಮಾತ್ರ ಕ್ಯಾನ್ಸರ್ ಕೇಂದ್ರಗಳಿಗೆ ಬರುತ್ತಾರೆ, ಇದರಿಂದ ಅವರ ಬದುಕುಳಿಯುವ ಸಾಧ್ಯತೆ ಕಡಿಮೆಯಾಗುತ್ತದೆ" ಎಂದು ಅವರು ತಿಳಿಸಿದರು.

ಮಾರಕ ಅಂಶಗಳು.

ಕ್ಯಾನ್ಸರ್‌ ಪ್ರಕರಣಗಳ ಹೆಚ್ಚಳ ಮತ್ತು ಅದರ ವಿವಿಧ ಮಾದರಿಗಳಿಗೆ ಹಲವಾರು ಅಪಾಯಕಾರಕ ಅಂಶಗಳು ಕಾರಣವಾಗುತ್ತವೆ. ಅದರಲ್ಲಿ ಸುಮಾರು ಮೂರನೇ ಭಾಗವು ತಂಬಾಕು ಸೇವನೆ ಮತ್ತು ಅಸಮತೋಲಿತ ಜೀವನಶೈಲಿಯಿಂದ ಉಂಟಾಗುತ್ತದೆ. ಆದ್ದರಿಂದ, ಪಾನ್ ಮಸಾಲಾ, ಗುಟ್ಕಾ, ಸುಪಾರಿ ಮತ್ತು ತಂಬಾಕು ಸೇವನೆ ದೂರವಿರಿಸುವುದು ಬಾಯಿ (ಒರಲ್), ಕಂಠ (ತೊಂಡೆ), ಆಹಾರ ನಾಳಿ  ಮತ್ತು ಹೊಟ್ಟೆಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ 

"ಶ್ವಾಸಕೋಶ  ಕ್ಯಾನ್ಸರ್ ಅಪಾಯವನ್ನು ತಗ್ಗಿಸಲು ತಂಬಾಕು ಧೂಮಪಾನಕ್ಕೆ ವಿದಾಯ ಹೇಳುವುದು ಅತ್ಯವಶ್ಯಕ. ಇನ್ನುಳಿದಂತೆ, ಮದ್ಯಪಾನ, ತಡವಾಗಿ ಮದುವೆಯಾಗುವುದು, ಶಾರೀರಿಕ ಚಟುವಟಿಕೆಗಳ ಕೊರತೆ, ದೇಹದ ಸ್ವಚ್ಛತೆಗೆ ಕಾಳಜಿ ಕೊರತೆಯಿರುವುದು, ಮಾನಸಿಕ ಒತ್ತಡ, ಅಹಿತಕರ ಮತ್ತು ಸಂರಕ್ಷಿತ ಆಹಾರದ ಸೇವನೆ (ಉದಾ: ಉಪ್ಪಿನ ಮೀನು), ದೀರ್ಘಕಾಲದ  ಹಾರ್ಮೋನ್ ಟ್ಯಾಬ್ಲೆಟ್ ಬಳಕೆ, ಅಕಾರ್ಬನಿಕ್ ಕೀಟನಾಶಕ, ಪೆಸ್ಟಿಸೈಡ್ ಹಾಗೂ ಗೆದ್ದಲುನಾಶಕಗಳ ವ್ಯಾಪಕ ಬಳಕೆ ಇತ್ಯಾದಿಗಳು ಕ್ಯಾನ್ಸರ್ ಉಂಟುಮಾಡುವ ಪ್ರಮುಖ  ಅಪಾಯಕಾರಕ ಅಂಶಗಳಾಗಿವೆ" ಎಂದು ಅವರು ತಿಳಿಸಿದರು.

ರೋಗ ಪತ್ತೆಹಚ್ಚುವಿಕೆ, ಮುಂಜಾಗ್ರತೆಯ ಕ್ರಮ, ಮತ್ತು ಚಿಕಿತ್ಸಾ ಕೇಂದ್ರ.

"ಚಿಕಿತ್ಸೆಗಿಂತ ರೋಗವನ್ನು ತಡೆಗಟ್ಟುವುದು  ಉತ್ತಮ ಮಾರ್ಗ. ಈ ನಿಟ್ಟಿನಲ್ಲಿ, ಬೆಂಗಳೂರಿನ ಕಿಡ್ವಾಯಿ ಸಂಸ್ಥೆಯ ಮಾದರಿಯಂತೆ, ಮೈಸೂರಿನ ಹೊಸ ಕ್ಯಾನ್ಸರ್ ಕೇಂದ್ರವು ಸಾರ್ವಜನಿಕರಲ್ಲಿ ಕ್ಯಾನ್ಸರ್ ಕುರಿತು ಅರಿವು ಮೂಡಿಸಲು, ಅದರ ಅಪಾಯಕಾರಕ ಅಂಶಗಳು ಹಾಗೂ ಲಕ್ಷಣಗಳ ಕುರಿತು ಮಾಹಿತಿ ನೀಡಲು ನಿಯಮಿತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.ಇದರ ಜೊತೆಗೆ , ಕ್ಯಾನ್ಸರ್ ಅನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ, ತಕ್ಷಣವೇ ಸೂಕ್ತ ಚಿಕಿತ್ಸೆ ನೀಡಲು ಹಾಗೂ ಸಂಪೂರ್ಣ ಗುಣಪಡಿಸಲು ಈ ಕೇಂದ್ರವು ನಿರಂತರ ರೋಗ ಪತ್ತೆಹಚ್ಚುವಿಕೆಯ  ಶಿಬಿರಗಳನ್ನು ಆಯೋಜಿಸಲಿದೆ" ಎಂದು ಡಾ. ನವೀನ್ ಹೇಳಿದರು.

ತುಮಕೂರಿನಲ್ಲಿ ನಿರ್ಮಾಣವಾಗುತ್ತಿರುವ ಕಿಡ್ವಾಯಿ ಆಸ್ಪತ್ರೆ.

ತುಮಕೂರಿನಲ್ಲಿಯೂ  ಕಿಡ್ವಾಯಿ ಪರಿಧಿ ಕ್ಯಾನ್ಸರ್ ಕೇಂದ್ರದ ನಿರ್ಮಾಣ ಕಾರ್ಯ ವೇಗವಾಗಿ ಮುಂದುವರಿಯುತ್ತಿದೆ. ಕಟ್ಟಡದ ನಿರ್ಮಾಣ ಪ್ರಕ್ರಿಯೆ ಪ್ರಗತಿಯಲ್ಲಿದ್ದು , ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ. ಇದೇ ರೀತಿಯಾಗಿ, ಶಿವಮೊಗ್ಗ ಮತ್ತು ಬೆಳಗಾವಿಯಲ್ಲೂ ಹೊಸ ಕೇಂದ್ರಗಳನ್ನು ಸ್ಥಾಪಿಸಲು ಸಜ್ಜುಗೊಳ್ಳುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ."

Post a Comment

0 Comments