Ticker

6/recent/ticker-posts

Ad Code

Responsive Advertisement

ಕರ್ನಾಟಕದಲ್ಲಿ ಹಾಲಿನ ದರ ಹೆಚ್ಚಳದ ಸಾಧ್ಯತೆ; ಗ್ರಾಹಕರು ಹೆಚ್ಚಿನ ಮೊತ್ತ ಪಾವತಿಸಲು ಸಿದ್ಧರಾಗಬೇಕಾ?

 ಕರ್ನಾಟಕದಲ್ಲಿ ಹಾಲಿನ ದರ ಹೆಚ್ಚಳದ ಸಾಧ್ಯತೆ; ಗ್ರಾಹಕರು ಹೆಚ್ಚಿನ ಮೊತ್ತ ಪಾವತಿಸಲು ಸಿದ್ಧರಾಗಬೇಕಾ?

ಕೆಎಂಎಫ್ ಹಾಲಿನಬೆಲೆ ಏರಿಕೆಗೆ ಜಾರಿಗೊಳಿಸಲು ಅನುಮತಿ ನೀಡುವ ಕುರಿತು ಸರ್ಕಾರದ ಅಂತಿಮ ತೀರ್ಮಾನ ಕಾಯಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಲೆಯ ಏರಿಕೆ ಜೊತೆಗೆ, ಹಾಲಿನ ಪ್ರಮಾಣವನ್ನು 1,050 ಮಿಲೀಲಿಟರ್‌ನಿಂದ 1,000 ಮಿಲೀಲಿಟರ್‌ಗೆ ಇಳಿಸಲು ಉದ್ದೇಶಿಸಲಾಗಿದೆ.




ಕರ್ನಾಟಕದಲ್ಲಿ ಹಾಲಿನ ದರವು ಮತ್ತೊಮ್ಮೆ ಏರಿಕೆಯಾಗುವ ಸಾಧ್ಯತೆಯಿದೆ. ಮುಂದಿನ ರಾಜ್ಯ ಬಜೆಟ್ ಅನ್ನು ಮಾರ್ಚ್ 7, 2025ರಂದು ಮಂಡಿಸಲಿರುವ ಹಿನ್ನೆಲೆ, ಹಾಲಿನ ಬೆಲೆ ಲೀಟರ್‌ಗೆ ರೂ. 5 ಹೆಚ್ಚಾಗುವ ನಿರೀಕ್ಷೆಯಿದೆ.

ಬೆಲೆಯ ಹೆಚ್ಚಳಕ್ಕೆ ಅಂತಿಮ ಅನುಮೋದನೆಗಾಗಿ ಕರ್ನಾಟಕ ಹಾಲು ಮಹಾಮಂಡಳಿ (KMF) ಸರ್ಕಾರದ ತೀರ್ಮಾನಕ್ಕಾಗಿ ಕಾಯುತ್ತಿದೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ. ಈ ಬದಲಾವಣೆಯೊಂದಿಗೇ, ಹಾಲಿನ ಪ್ಯಾಕೆಟ್‌ಗಳ ಪ್ರಮಾಣವನ್ನು 1,050 ಮಿಲಿಲೀಟರ್‌ನಿಂದ 1,000 ಮಿಲಿಲೀಟರ್‌ಗೆ ಇಳಿಸಲು ಕೂಡ ಯೋಜಿಸಲಾಗಿದೆ.

ಕಳೆದ ವರ್ಷ ಗ್ರಾಹಕರಿಗೆ ಲಾಭವಾಗುವಂತೆ ಹಾಲಿನ ಪ್ಯಾಕೆಟ್‌ಗಳ ಪ್ರಮಾಣವನ್ನು ಹೆಚ್ಚಿಸಲಾಗಿತ್ತು. ಆದರೆ, ಈ ಬಾರಿ ದರ ಏರಿಕೆಯಾಗುವುದರ ಜೊತೆಗೆ ಹೆಚ್ಚಿದ ಪ್ರಮಾಣವನ್ನು ಪುನಃ ಕಡಿಮೆ ಮಾಡಲಾಗುತ್ತಿದೆ. ಇದರಿಂದಾಗಿ, ನಂದಿನಿ toned milk ದರ ಲೀಟರ್‌ಗೆ ರೂ. 44ರಿಂದ ರೂ. 47ಕ್ಕೆ ಏರಲಿದೆ, ಇದು ಕಳೆದ ಮೂರು ವರ್ಷಗಳಲ್ಲಿ ಕಂಡ ಅತಿ ಹೆಚ್ಚಿನ ಬೆಲೆ ಏರಿಕೆ ಆಗಲಿದೆ.

ಕರ್ನಾಟಕ ಸರ್ಕಾರದ =ಡಿಯಲ್ಲಿ ಕಾರ್ಯನಿರ್ವಹಿಸುವ ಕರ್ನಾಟಕ ಕೋ-ಆಪರೇಟಿವ್ ಮಿಲ್ಕ್ ಪ್ರೊಡ್ಯೂಸರ್ಸ್ ಫೆಡರೇಶನ್ ಲಿಮಿಟೆಡ್ (KMF) ‘ನಂದಿನಿ’ ಬ್ರ್ಯಾಂಡ್ ಮೂಲಕ ಹಾಲು, ಐಸ್ಕ್ರೀಂ, ಚಾಕೊಲೇಟ್ ಮತ್ತು ಸಿಹಿತಿಂಡಿಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ.

2022ರಲ್ಲಿ ಲೀಟರ್‌ಗೆ ರೂ. 3 ಹಾಗೂ 2024ರಲ್ಲಿ ರೂ. 2 ಹೆಚ್ಚಳವನ್ನು ಅನುಷ್ಠಾನಗೊಳಿಸಿದ KMF, ಹಾಲಿನ ಬೆಲೆ ಏರಿಕೆಯಿಂದ ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡಲು ಆ ಸಮಯದಲ್ಲಿ ಲೀಟರ್‌ಗೆ 50 ಮಿಲಿಲೀಟರ್ ಹೆಚ್ಚಿಸಿತ್ತು. ಆದರೆ ಈ ಬಾರಿ, ಬೆಲೆ ಏರಿಕೆಗೆ ಪೂರಕವಾಗಿ ಹೆಚ್ಚುವರಿ ಪ್ರಮಾಣವನ್ನು ಹಿಂಪಡೆಯಲಾಗುತ್ತಿದ್ದು, ಇದರಿಂದ ಗ್ರಾಹಕರಿಗೆ ಹಾಲು ಇನ್ನಷ್ಟು ದುಬಾರಿಯಾಗಲಿದೆ.

ಪ್ರತಿಪಕ್ಷ ನಾಯಕರ ತೀವ್ರ ಆಕ್ರೋಶ - ಹಾಲಿನ ಬೆಲೆ ಏರಿಕೆಗೆ ಸರ್ಕಾರದ ವಿಫಲ ಆಡಳಿತ

ರಾಜ್ಯದಲ್ಲಿ ಹಾಲಿನ ಬೆಲೆ ಏರಿಕೆ ನಿರ್ಧಾರಕ್ಕೆ ಪ್ರತಿಪಕ್ಷ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಚಾಲವಾಡಿ ನಾರಾಯಣಸ್ವಾಮಿ ಸರ್ಕಾರದ ಹಣಕಾಸು ನಿರ್ವಹಣೆಯ ವೈಫಲ್ಯವನ್ನು ಟೀಕಿಸಿ, “ಈ ಸರ್ಕಾರಕ್ಕೆ ಬಜೆಟ್ ನಿರ್ವಹಿಸುವುದು ಗೊತ್ತಿಲ್ಲ, ಬೆಲೆ ಏರಿಕೆ ಮಾಡುವುದು ಮಾತ್ರ ಗೊತ್ತಿದೆ” ಎಂದು ವ್ಯಂಗ್ಯವಾಡಿದ್ದಾರೆ.

ಸರ್ಕಾರದ ಈ ನಿರ್ಧಾರದಿಂದ ರೈತರಿಗೆ ಲಾಭವಾಗುತ್ತದೆಯೇ ಎಂಬ ಪ್ರಶ್ನೆಯನ್ನು ಎತ್ತಿದರು, “ಮತ್ತು ರೈತರಿಗೆ 5ರೂ. ಸಹಾಯ ನೀಡುವುದಾಗಿ ಘೋಷಿಸಿದ್ದಾರೆ. ಆದರೆ, ಈ ಹಣ ವಾಸ್ತವದಲ್ಲಿ ಅವರ ಕೈಗೆ ತಲುಪುತ್ತದಾ, ಅಥವಾ ಸರಕಾರದ ಜೇಬಿಗೆ ಹೋಗುತ್ತದಾ?” ಎಂದು ಅವರು ಪ್ರಶ್ನಿಸಿದರು.

ಹಾಲಿನ ದರ ಏರಿಕೆಗೆ ಕಾರಣವನ್ನು ವಿವರಿಸಿದ ಕರ್ನಾಟಕ ಹಾಲು ಮಹಾಮಂಡಳಿ (KMF) ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ, “ಹಾಲಿನ ಸಂಗ್ರಹಣೆ ಗಣನೀಯವಾಗಿ ಕುಸಿಯುತ್ತಿದೆ” ಎಂದಿದ್ದಾರೆ. ಹಾಲಿನ ದಿನದ ಸಂಗ್ರಹಣೆ ಹಿಂದಿನ 85-89 ಲಕ್ಷ ಲೀಟರ್‌ನಿಂದ ಪ್ರಸ್ತುತ 79-81 ಲಕ್ಷ ಲೀಟರ್‌ಗೆ ಇಳಿದಿದೆ ಎಂದು ತಿಳಿಸಿದ್ದಾರೆ.

ಈ ಬೆಳವಣಿಗೆಯ ಬಳಿಕವೂ ನಂದಿನಿ ಹಾಲು ರಾಜ್ಯದಲ್ಲಿನ ಇತರ ಬ್ರ್ಯಾಂಡ್‌ಗಳಿಗಿಂ ತೀರಾ ತಗ್ಗಿದ ಮಟ್ಟದಲ್ಲೇ ಉಳಿಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.



Post a Comment

0 Comments